ತಾಲೂಕಿನ ಬಹುತೇಕ ಕಡೆಗಳಲ್ಲಿ ಯುವಕರು ಹಾಗೂ ಮಕ್ಕಳು ಬಣ್ಣ ಹಚ್ಚಿ ಸಂಭ್ರಮಿಸುವ ದೃಶ್ಯಗಳು ಕಂಡುಬಂದವು. ಶಾಲಾ ಮಕ್ಕಳು ಬಣ್ಣ ತುಂಬಿದ ಬಾಟಲಿಗಳನ್ನು ಹಿಡಿದು ಒಬ್ಬರಿಗೊಬ್ಬರು ಎರಚುವ ಮೂಲಕ ಖುಷಿ ಹಂಚಿಕೊಂಡರು.
ಈ ವೇಳೆ ಕೈವಾರ ತಾತಯ್ಯನವರ ಪಲ್ಲಕ್ಕಿ ಮೆರವಣಿಗೆಯ ಟ್ರಾಕ್ಟರ್ ಅನ್ನು, ಮಾಜಿ ಸಂಸದ ಮುನಿಸ್ವಾಮಿ ಖುದ್ದು ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ತಮಟೆ ವಾದ್ಯಕ್ಕೆ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಬಲಿಜ ಸಮುದಾಯದ ನಾಯಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.